ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶಾತಿ ಅವಕಾಶಗಳ ಕುರಿತು ನಿಮಗೆಷ್ಟು ಗೊತ್ತು?
ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿಯ ಶಿಕ್ಷಣದ ಗುಣಮಟ್ಟದ ಬಗ್ಗೆ ಯಾರು ಪ್ರಶ್ನೆ ಮಾಡುವಂತೆಯೇ ಇಲ್ಲ. ಇನ್ನು ಇಲ್ಲಿನ ಪ್ರವೇಶ ಶುಲ್ಕದ ಬಗ್ಗೆ ಮಾತನಾಡುವಂತೆಯೇ ಇಲ್ಲ. ಕೇವಲ ವಾರ್ಷಿಕ 1500 ರೂವರೆಗೆ ಬರಬಹುದೇನೋ ಅಷ್ಟೆ. ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಇಲ್ಲಿ ಉಚಿತ ಶಿಕ್ಷಣ ಸಿಗುತ್ತದೆ ಎಂದೇ ಹೇಳಬಹುದು. ಅಂದಹಾಗೆ ಹೆಸರು ಕೇಳಿದ ತಕ್ಷಣ ಪ್ರವೇಶ ಪಡೆಯಬೇಕು ಎನ್ನುವ ವಿದ್ಯಾರ್ಥಿಗಳಾಗಲಿ, ತಮ್ಮ ಮಕ್ಕಳನ್ನು ಅಡ್ಮಿಷನ್ ಮಾಡಿಸಬೇಕು ಎಂದು ಉತ್ಸುಕತೆ ತೋರುವ ಪೋಷಕರಿಗಾಗಲಿ ಬಹುಸಂಖ್ಯಾತರಿಗೆ ಇಲ್ಲಿನ ಪ್ರವೇಶಾತಿ ಬಗ್ಗೆ ತಿಳಿದೇ ಇಲ್ಲ ಎನ್ನಬಹುದು.
ಅಂದರೆ ಯಾವೆಲ್ಲ ಮಕ್ಕಳು ಪ್ರವೇಶ ಪಡೆಯಬಹುದು ಎಂದು ತಿಳಿದಿಲ್ಲ ಎನ್ನಬಹುದು. ಆದ್ದರಿಂದ ಇಂದಿನ ಲೇಖನದಲ್ಲಿ ಕೇಂದ್ರೀಯ ವಿದ್ಯಾಲಯಗಳ ಶಾಲೆಗಳಲ್ಲಿ ಪ್ರವೇಶ ಆದ್ಯತೆಗಳು ಯಾರಿಗೆ ಇವೆ ಎಂಬುದನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
- ಮೊದಲ ಆದ್ಯತೆ ಕೇಂದ್ರ ಸರ್ಕಾರದ ವರ್ಗಾವಣೆಯಾಗಬಲ್ಲ / ವರ್ಗಾವಣೆಯಾಗದ ಉದ್ಯೋಗಿಗಳ ಮಕ್ಕಳಿಗೆ ಪ್ರವೇಶಕ್ಕೆ ಆಧ್ಯತೆ ನೀಡಲಾಗುತ್ತದೆ.
- ಎರಡನೇಯ ಆದ್ಯತೆಯಾಗಿ ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಗಳು / ಪಬ್ಲಿಕ್ ಸೆಕ್ಟಾರ್ ಸಂಸ್ಥೆಗಳು / ಉನ್ನತ ಕಲಿಕಾ ಸಂಸ್ಥೆಗಳ ವರ್ಗಾವಣೆಯಾಗಬಲ್ಲ / ವರ್ಗಾಯಿಸಲಾಗದ ಉದ್ಯೋಗಿಗಳ ಮಕ್ಕಳಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುತ್ತದೆ. ಮಾಜಿ ಸೈನಿಕರ ಮಕ್ಕಳಿಗೆ ಪ್ರವೇಶಕ್ಕೆ ಆದ್ಯತೆ ನೀಡಲಾಗುತ್ತದೆ.
ನಿಮ್ಮ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕಾಗಿ ಪ್ರವೇಶಾತಿ ಬೇಕೇ?., ಈಗಲೇ RTE ಅರ್ಜಿ ಹಾಕಿ ಈ ಮೇಲಿನ ವಿಶೇಷ ಆದ್ಯತೆಗಳನ್ನು ಹೊರತುಪಡಿಸಿ, ಉಳಿದ ಪ್ರವೇಶಾವಕಾಶದ ಸೀಟುಗಳೆಂದರೆ.. ಆರ್ಟಿಇ -ಶಿಕ್ಷಣ ಹಕ್ಕು ಕಾಯ್ದೆ ಕೋಟಾ- ಈ ಕೋಟಾದಡಿಯಲ್ಲಿ ನೀಡುವ ಶೇಕಡ.25 ರಷ್ಟು ಸೀಟುಗಳ ಪ್ರವೇಶಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಬಾಲವಾಟಿಕದಿಂದ ಆರಂಭವಾಗಿ 12ನೇ ತರಗತಿವೆಗೆ ಆರ್ಟಿಇ ಅಡಿ 2ನೇ ತರಗತಿ ಇಂದ 8ನೇ ತರಗತಿವರೆಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆ ನಡೆಸಲಾಗುವುದಿಲ್ಲ. ಲಭ್ಯ ಸೀಟುಗಳ ಆಧಾರದಲ್ಲಿ ಪ್ರವೇಶವನ್ನು ಅರ್ಹತಾ ಮಾನದಂಡಗಳ ಪ್ರಕಾರ ಪರಿಗಣಿಸಲಾಗುತ್ತದೆ. ಸಂಸತ್ತಿನ ಸದಸ್ಯರ ಕೋಟಾದಡಿ
- ಪ್ರವೇಶಾವಕಾಶವನ್ನು ನೀಡಲಿದ್ದು, ಆಸಕ್ತ ಪೋಷಕರು ತಮ್ಮ ಮಕ್ಕಳ ಕೇಂದ್ರೀಯ ವಿದ್ಯಾಲಯ ಸಮಿತಿ ಶಾಲೆಗಳ ಪ್ರವೇಶಕ್ಕೆ ತಮ್ಮ ಸ್ಥಳೀಯ ಸಂಸದರನ್ನು ಭೇಟಿ ಮಾಡಿ ಸಹಾಯ ಕೇಳಬಹುದು. ಸಾಮಾನ್ಯ ನಾಗರೀಕರ ವಾರ್ಡ್ ಕೋಟಾ - ಕೆಲವು ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಸಾಮಾನ್ಯ ನಾಗರಿಕ ವಾರ್ಡ್ ಕೋಟಾದಡಿ ಸಹ ಕೆಲವು ಸೀಟುಗಳು ಲಭ್ಯ ಇರುತ್ತವೆ. ಆದರೆ ಇವುಗಳನ್ನು ಸ್ಥಳೀಯ ಕೇಂದ್ರೀಯ ವಿದ್ಯಾಲಯ ಶಾಲೆಗಳಿಗೆ ಹೋಗಿ ವಿಚಾರಣೆ ಮಾಡಿ ತಿಳಿದುಕೊಳ್ಳಬೇಕಷ್ಟೆ. ಖಾಸಗಿ ಕ್ಷೇತ್ರದ ಉದ್ಯೋಗಿಗಳ ಕೋಟಾ - ಕೆಲವು ಕೇಂದ್ರೀಯ ವಿದ್ಯಾಲಯಗಳು ಖಾಸಗಿ ಕ್ಷೇತ್ರದ ಎಂಪ್ಲಾಯಿಗಳ ಕೋಟಾದಡಿ ಸಹ ಸೀಟು ಹಂಚಿಕೆ ಮಾಡಿರುತ್ತವೆ. ಇವುಗಳನ್ನು ಸಹ ಪರಿಶೀಲಿಸಿಕೊಂಡು ಅವಕಾಶ ಇದ್ದಲ್ಲಿ ಪ್ರವೇಶ ಕೊಡಿಸಬಹುದು. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧನೆ ಸಂಬಂಧ AICTE ಇಂದ ಮಹತ್ವದ ಸುತ್ತೋಲೆ ಪ್ರಕಟ ವಿಶೇಷ ಅವಕಾಶಗಳು
ಮೇಲಿನ ಕೋಟಾಗಳನ್ನು ಹೊರತುಪಡಿಸಿ ಕೇಂದ್ರೀಯ ವಿದ್ಯಾಲಯ ಸಿಬ್ಬಂದಿಗಳ ಮಕ್ಕಳಿಗೆ, ಕಠಿಣ ಪರಿಸ್ಥಿತಿಗಳಿಂದ ಸಾವಿಗೀಡಾದ ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ, ರಕ್ಷಣಾ ಪಡೆಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ಪಡೆದವರ ಮಕ್ಕಳಿಗೆ, ರಾಷ್ಟ್ರಪತಿಗಳಿಂದ ಪೊಲೀಸ್ ಪದಕ ಪಡೆದವರ ಮಕ್ಕಳಿಗೆ, ಸರ್ಕಾರದ ಪ್ರಾಯೋಕತ್ವದ ಉನ್ನತ ಕ್ರೀಡಾಸ್ಪರ್ಧೆಗಳಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ, ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ, ರಾಷ್ಟ್ರೀಯ ಸೌರ್ಯ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ, ಪ್ಯಾರಾ ಮಿಲಿಟರಿ ಪಡೆಗಳಲ್ಲಿ ಕರ್ತವ್ಯ ಸಲ್ಲಿಸಿದ ಪೋಷಕರ ಮಕ್ಕಳಿಗೆ ಪ್ರವೇಶಾವಕಾಶ ಇದೆ.
Next Story
READ ON APP