Hero Image

'ಡ್ರಾಮಾ ಜ್ಯೂನಿಯರ್ಸ್' ಸೀಸನ್ 5ರ ಫಿನಾಲೆ; ಈ ಬಾರಿ ಇಬ್ಬರಿಗೆ ಒಲಿಯಿತು ವಿನ್ನರ್ ಪಟ್ಟ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ 'ಡ್ರಾಮಾ ಜ್ಯೂನಿಯರ್ಸ್' ಕೂಡ ಒಂದು. ಮಕ್ಕಳಿನ ಪ್ರತಿಭೆಯನ್ನು ಬೆಳಕಿಗೆ ತರುವಂತಹ ಈ ಶೋ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಅಂದಹಾಗೆ, ಕೆಲ ತಿಂಗಳ ಹಿಂದೆ ಶುರುವಾಗಿದ್ದ 'ಡ್ರಾಮಾ ಜ್ಯೂನಿಯರ್ಸ್' ಸೀಸನ್ 5ಕ್ಕೆ ಕೊನೆಗೂ ತೆರೆಬಿದ್ದಿದೆ. ಈ ಬಾರಿ ವಿಷ್ಣು ಕುಣಿಗಲ್ ಮತ್ತು ರಿಷಿಕಾ ಕುಂದೇಶ್ವರ ಅವರು ಜಂಟಿಯಾಗಿ ವಿನ್ನರ್ ಪಟ್ಟ ಪಡೆದುಕೊಂಡಿದ್ದಾರೆ.
ಇಬ್ಬರಿಗೆ ಗೆಲುವಿನ ಟ್ರೋಫಿಡ್ರಾಮಾ ಜೂನಿಯರ್ಸ್ ಸೀಸನ್ 5ರಲ್ಲಿ ಇಬ್ಬರಿಗೆ ವಿನ್ನರ್ ಟ್ರೋಫಿ ಸಿಕ್ಕಿದೆ. ಮಂಗಳೂರಿನ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ ರಿಷಿಕಾ ಮತ್ತು ವೆಂಕಟೇಶ್ ಮತ್ತು ರಾಜೇಶ್ವರಿ ದಂಪತಿ ಪುತ್ರ ವಿಷ್ಣು ಕುಣಿಗಲ್ ಈ ಬಾರಿಯ ವಿನ್ನರ್‌ಗಳಾಗಿದ್ದಾರೆ. ಇವರಿಗೆ 25 ಲಕ್ಷ ರೂ. ಬೆಲೆ ಬಾಳುವ 30*40 ಸೈಟ್‌ ಬಹುಮಾನವಾಗಿ ಸಿಕ್ಕಿದೆ. "ರಿಷಿಕಾ ಕುಂದೇಶ್ವರ ಈ ಸೀಸನ್‌ನ ಫೇವರಿಟ್ ಸ್ಪರ್ಧಿ. ಸ್ಪಷ್ಟತೆಗೆ ಇನ್ನೊಂದು ಹೆಸರೇ ರಿಷಿಕಾ ಎಂದು ಹೇಳಬಹುದು. ರಿಷಿಕಾ ವೇದಿಕೆ ಮೇಲೆ ಬಂದರೆ ಅಲ್ಲೊಂದು ಅದ್ಭುತ ಪರ್ಫಾರ್ಮೆನ್ಸ್ ಖಂಡಿತ ಇರುತ್ತದೆ ಮತ್ತು ಅಲ್ಲಿ ಹುಡುಕಿದರೂ ತಪ್ಪು ಸಿಗಲ್ಲ" ಎಂದು ರವಿಚಂದ್ರನ್ ಹೇಳಿದರೆ, "ರಿಷಿಕಾನ ನಂಬಿ ಯಾವ ಪಾತ್ರವನ್ನಾದರೂ ನೀಡಬಹುದು" ಎಂದು ಲಕ್ಷ್ಮೀ ಹೇಳಿದ್ದಾರೆ.
ಉಳಿದ ವಿಜೇತರ ಬಗ್ಗೆಯೂ ತೀರ್ಪುಗಾರರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಎಲ್ಲರಿಗೂ ಥ್ಯಾಂಕ್ಸ್ ಎಂದ ವಿಷ್ಣು"ಇಂತಹ ದೊಡ್ಡ ವೇದಿಕೆಯಲ್ಲಿ ನನಗೆ ಅವಕಾಶ ಸಿಕ್ಕಿತ್ತು, ನಾನು ಇವತ್ತು ಇದರಲ್ಲಿ ಗೆದ್ದಿದ್ದೇನೆ. ನನಗೆ ವೋಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಸ್. ಎಲ್ಲರ ಆಶೀರ್ವಾದ ಸದಾ ನನ್ನ ಮೇಲೆ ಹೀಗೆ ಇರಲಿ. ಇನ್ನುಮುಂದೆಯೂ ನಿಮ್ಮನ್ನು ಹೀಗೆ ಮನರಂಜಿಸುತ್ತೇನೆ, ನಗಿಸುತ್ತೇನೆ" ಎಂದು ಹೇಳುತ್ತಾನೆ ಕುಣಿಗಲ್‌ನ ವಿಷ್ಣು. ಅಪ್ಪ-ಅಮ್ಮನಿಗೆ ಥ್ಯಾಂಕ್ಸ್ ಎಂದ ರಿಷಿಕಾ"ನಾನು ಡ್ರಾಮಾ ಜೂನಿಯರ್ಸ್ 5ರಲ್ಲಿ ಸ್ಪರ್ಧಿಯಾಗಿ ಆಗಮಿಸಿದ್ದೆ, ನಾನೀಗ ವಿನ್ನರ್ ಆಗಿದ್ದೇನೆ.
ನನಗೆ ಈಗ ತುಂಬ ಖುಷಿ ಆಗುತ್ತಿದೆ. ಇದಕ್ಕಾಗಿ ನಾನು ಜೀ ಕನ್ನಡ ವಾಹಿನಿಗೆ ತುಂಬ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತಿನಿ. ನನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದ್ದಕ್ಕೆ ನನ್ನ ಅಪ್ಪ-ಅಮ್ಮನಿಗೂ ಥ್ಯಾಂಕ್ಸ್ ಹೇಳುತ್ತೇನೆ" ಎಂಬುದು ಮತ್ತೋರ್ವ ವಿನ್ನರ್ ರಿಷಿಕಾ ಮನದಾಳದ ಮಾತು. ಉಳಿದಂತೆ ಯಾರಿಗೆಲ್ಲಾ ಪ್ರಶಸ್ತಿ ಸಿಕ್ಕಿದೆ?ಶಿವಮೊಗ್ಗ ಜಿಲ್ಲೆಯ ಮಹಾಲಕ್ಷ್ಮೀ ಮೊದಲ ರನ್ನರ್ ಅಪ್ ಆಗಿದ್ದಾಳೆ. ಈ ಬಾಲಕಿಗೆ 3 ಲಕ್ಷ ರೂ. ನಗದು ಬಹುಮಾನ ಸಿಕ್ಕಿದೆ. ಹಾಗೆಯೇ, ಭದ್ರಾವತಿಯ ಇಂಚರಾಗೆ ಎರಡನೇ ರನ್ನರ್‌ ಅಪ್ ಪ್ರಶಸ್ತಿ ಸಿಕ್ಕಿದ್ದು, ಬಹುಮಾನವಾಗಿ 1 ಲಕ್ಷ ರೂ.
ನಗದು ಹಣ ಸಿಕ್ಕಿದೆ. ಇನ್ನು, ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ಪುಟಾಣಿ ಬೆಂಗಳೂರಿನ ಆರ್ಯ ಸ್ವರೂಪ್‌ಗೆ 'ಎಂಟರ್‌ಟೇನರ್ ಆಫ್ ದಿ ಸೀಸನ್' ಪ್ರಶಸ್ತಿ ನೀಡಲಾಗಿದೆ.ಈ ಶೋನಲ್ಲಿ ತೀರ್ಪುಗಾರರಾಗಿ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌, ಹಿರಿಯ ನಟಿ ಲಕ್ಷ್ಮೀ, ರಚಿತಾರಾಮ್ ಇದ್ದರು. ರಂಗ ಮೇಷ್ಟ್ರುಗಳಾಗಿ ಅರುಣ್‌ ಸಾಗರ್‌ ಮತ್ತು ರಾಜು ತಾಳಿಕೋಟೆ ಕೆಲಸ ಮಾಡಿದ್ದರು. ಶೋನವನ್ನು ಮಾಸ್ಟರ್ ಆನಂದ್ ನಿರೂಪಣೆ ಮಾಡಿದ್ದರು.

READ ON APP