Hero Image

ಮುಸ್ಲಿಮರು ದೇಶದಿಂದ ಓಡೋಗಬೇಕು ಎಂದು ಬಿಜೆಪಿಯವರು ಚಿತ್ರಹಿಂಸೆ ಕೊಡ್ತಿದ್ದಾರೆ : ಡಿಕೆ ಶಿವಕುಮಾರ್ ಆಕ್ರೋಶ

ಬೆಂಗಳೂರು : ನಮ್ಮದು ಶಾಂತಿಯ ತೋಟ, ಬಿಜೆಪಿಯವರು ಮುಸ್ಲಿಂ ಬಾಂಧವರಿಗೆ ಮಾನಸಿಕವಾಗಿ ಹಿಂಸೆ ಕೊಡ್ತಿದ್ದಾರೆ. ದೇಶದಿಂದ ಓಡೋಗಬೇಕು ಅಂತ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಮುಸ್ಲಿಂ ತುಷ್ಟೀಕರಣದ ಆರೋಪ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ, ಯಾವುದೇ ಕ್ರಿಮಿನಲ್ ಆಕ್ಟಿವಿಟಿಗೆ ನಾವು ಉತ್ತೇಜನ ಕೊಡಲ್ಲ.
ಶಾಂತಿಯಿಂದ ನಡೆಸಿಕೊಂಡು ಹೋಗುತ್ತೇವೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಅದಲ್ಲದೇ, ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಕಿಡಿಕಾರಿದ ಅವರು, ಅವರಿಗೆ ಬೇರೆ ಯಾವುದೇ ವಿಚಾರ ಇಲ್ಲ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಫೇಲ್ ಆಗಿದೆ. ದೊಡ್ಡ ಇಂಜಿನ್ ಕೂಡ ಫೇಲ್ ಆಗಲಿದೆ ಎಂದರು.ಕಾಂಗ್ರೆಸ್ ಜಾಹೀರಾತಿಗೆ ಬಿಜೆಪಿ ಜಾಹೀರಾತು ಮೂಲಕ ತಿರುಗೇಟು ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯ ನಮ್ಮ ಚೊಂಬು ಜಾಹೀರಾತಿನಿಂದ ಅಷ್ಟು ಎಚ್ಚರಿಕೆ ಆಗಿದೆಯಲ್ಲ. ದೇವೇಗೌಡರೇ ಖಾಲಿ ಚೊಂಬು ತೋರಿಸಿ ನಿಮ್ಮಿಂದ ಅನ್ಯಾಯ ಆಯ್ತು ನಮಗೆ ಎಂದಿದ್ದಾರೆ. ನಮಗೆ ಮಾತನಾಡುವುದಕ್ಕೆ ಶಕ್ತಿ ಇಲ್ಲ ಅಂತ ದೇವೇಗೌಡ್ರು ಪ್ರಧಾನ ಮಂತ್ರಿಗಳಿಗೆ ಹೇಳಿದ್ದಾರೆ.
ಅವರು ಸಾರ್ವಜನಿಕರಿಗೆ ಏನು ಬೇಕಾದ್ರು ಹೇಳಬಹುದು. ಈ ಹಿಂದೆ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತಾ ದೇವೇಗೌಡರು ಕುಮಾರಸ್ವಾಮಿ ಭಾಷಣ ಮಾಡಿದ್ದರು ಎಂದರು. ನಾವು ಕೂಡ ಪ್ರಶ್ನೆ ಕೇಳಿದ್ದೇವೆ, ಎರಡನ್ನು ಯೋಚನೆ ಮಾಡುವ ಶಕ್ತಿ ಜನರಿಗಿದೆ, ಚೊಂಬಲ್ಲಿ ಬಂದಿದ್ಯಲ್ಲ 15 ಲಕ್ಷ ರೂ., ನಮ್ಮ ಕಾರ್ಯಕರ್ತರು ನಮ್ಮ ನಾಯಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಉದ್ಯೋಗ ಕೊಡುವ ಬಗ್ಗೆ ಹಾಲಿ ಚೊಂಬು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿಯ ಚಿಪ್ಪು ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯಿಸಿದ, ಯಾವ ಚಿಪ್ಪು? ಕನ್ನಡ ಬಾವುಟ ಹಿಡಿದವರು ನಾವು, ಕನ್ನಡಿಗರ ಹಕ್ಕು ಕೇಳಿರುವವರು, ನಾವು ನಮ್ಮ ತೆರಿಗೆ ಹಕ್ಕು ಕೇಳಿದ್ದೇವೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿವೈ ವಿಜಯೇಂದ್ರ ವಾಗ್ದಾಳಿಇನ್ನು, ಡಿಕೆ ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ನಾವು ಮುಸಲ್ಮಾನರ ಬಗ್ಗೆ ಮಾತನಾಡುತ್ತಿಲ್ಲ. ನಾವು ದೇಶ ದ್ರೋಹಿಗಳು, ಕೊಲೆಗಡುಕರ ಬಗ್ಗೆ ಮಾತನಾಡುತ್ತಿದ್ದೇವೆ. ಅಲ್ಪ ಸಂಖ್ಯಾತ ತುಷ್ಠೀಕರಣ ಮಾಡುತ್ತಿರುವವರ ವಿರುದ್ಧ ನಮ್ಮ ಬೇಸರ. ಅಂತಹವರ ರಕ್ಷಣೆ ಮಾಡುತ್ತಿರುವವರ ವಿರುದ್ಧ ನಮ್ಮ ಹೋರಾಟ. ಜನಗಳ ತಾಳ್ಮೆಗೂ ಕೂಡ ಹಿತಿ‌ಮಿತಿ ಇದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನರು ತಕ್ಕ ಪಾಠ ಕಲಿಸ್ತಾರೆ ಎಂದರು.

READ ON APP