Hero Image

ಕರ್ನಾಟಕ 2ನೇ ಹಂತದ ಲೋಕಸಭಾ ಚುನಾವಣೆ: ಈ 3 ಕ್ಷೇತ್ರಗಳಲ್ಲಿ ಪ್ರಬಲ ಬಂಡಾಯ ಅಭ್ಯರ್ಥಿಗಳ ಶಿವತಾಂಡವ ಫಿಕ್ಸ್?

ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮೇ 7 ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿದ್ದು, ಅಖಾಡದ ಚಿತ್ರಣ ಸ್ಪಷ್ಟವಾಗಲಿದೆ. ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿಉಳಿಯುವ ಸಾಧ್ಯತೆ ಖಚಿತವಾಗಿದೆ. ಅಂತೆಯೇ ಧಾರವಾಡದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಪಕ್ಷೇತರರಾಗಿ ಹಾಗೂ ದಾವಣಗೆರೆಯಲ್ಲಿ ವಿನಯ್‌ ಕುಮಾರ್‌ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ತೊಡೆ ತಟ್ಟುವುದು ನಿಚ್ಚಳವಾಗಿದೆ.ತೊಡೆ ತಟ್ಟಿರುವ ಮೂವರ ಪೈಕಿ ಇಬ್ಬರು ಹೆಸರಲ್ಲಿಈಶ್ವರನಿದ್ದಾನೆ.
ಇನ್ನೊಬ್ಬರ ಹೆಸರಲ್ಲಿ'ವಿನಯ'ವಿದ್ದು, ಶಿವ ವಿನಯಕ್ಕೂ ಸಂಕೇತವಾಗಿದ್ದಾನೆ. ಹಾಗಾಗಿ ಬಿಜೆಪಿ,ಕಾಂಗ್ರೆಸ್‌ ಪಾಲಿಗೆ ಈ ಮೂವರು ಕಣದಲ್ಲಿಉಳಿದರೆ, ಅದೊಂದು ರೀತಿಯಲ್ಲಿಶಿವ ತಾಂಡವ ನೃತ್ಯವಾಗಿ ಪರಿಣಮಿಸಲಿದೆ. ರಾಜ್ಯ ಬಿಜೆಪಿ ವರಿಷ್ಠ ನಾಯಕ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕುಟುಂಬದ ವಿರುದ್ಧವೇ ತಿರುಗಿ ಬಿದ್ದಿರುವ ಕೆ.ಎಸ್‌.ಈಶ್ವರಪ್ಪ ಈಗಾಗಲೇ ಬಹಳ ದೂರ ಸಾಗಿ ಬಂದಿದ್ದಾರೆ. ಹಾಗಾಗಿ ಅವರು ಉಮೇದುವಾರಿಕೆ ವಾಪಸ್‌ ತೆಗೆದುಕೊಳ್ಳುವ ಸಾಧ್ಯತೆ ತೀರಾ ವಿರಳ. ಈ ನಿಟ್ಟಿನಲ್ಲಿಈಶ್ವರಪ್ಪ ಮನವೊಲಿಸುವ ಯತ್ನವನ್ನೂ ಬಿಜೆಪಿ ಕೈಬಿಟ್ಟಿದೆ. ರಾಜ್ಯ ಬಿಜೆಪಿ ನಾಯಕರು ಅನೇಕ ಬಾರಿ ವಿನಂತಿಸಿಕೊಂಡರೂ ಈಶ್ವರಪ್ಪ ಬಗ್ಗಿಲ್ಲ.
ಪಕ್ಷದ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್‌ ಅಗರವಾಲ್‌ ಕೂಡ ಮಾತುಕತೆ ನಡೆಸಿದ್ದರು. ಅದಕ್ಕೂ ಈಶ್ವರಪ್ಪ ಸೊಪ್ಪು ಹಾಕಿಲ್ಲ. ಹಾಗಾಗಿ ಈಶ್ವರಪ್ಪ ಜತೆಗಿನ ಸಂಧಾನ ಯತ್ನ ಸಂಪೂರ್ಣ ಮುರಿದು ಬಿದ್ದಂತಾಗಿದೆ. ಈಶ್ವರಪ್ಪನ ಹಿಂದೆ ಸರಿಸಲು ಕೊನೆಯ ಪ್ರಯತ್ನಈ ನಡುವೆಯೂ ಕೊನೆಯ ಪ್ರಯತ್ನವಾಗಿ ಸಂಘ ಪರಿವಾರದ ಪ್ರತಿನಿಧಿಗಳು ಈಶ್ವರಪ್ಪ ಜತೆಗೆ ಮಾತನಾಡಲಿದ್ದಾರೆ ಎಂಬ ವರ್ತಮಾನವಿದೆ. ಈ ಮಾತುಕತೆ ಫಲಪ್ರದವಾದರೆ ಈಶ್ವರಪ್ಪ ಕಣದಿಂದ ಹಿಂದೆ ಸರಿಯಲಿದ್ದಾರಾ ಎಂಬ ಬಗ್ಗೆ ಕುತೂಹಲವಿದೆ. ದಿಂಗಾಲೇಶ್ವರ ಸ್ವಾಮೀಜಿ ಜಗ್ಗಿಲ್ಲಧಾರವಾಡದಲ್ಲಿ ಲಿಂಗಾಯತ ಸ್ವಾಭಿಮಾನದ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ದಿಂಗಾಲೇಶ್ವರ ಸ್ವಾಮೀಜಿ ಬಿಜೆಪಿಗೆ ಸವಾಲೆಸೆದಿದ್ದಾರೆ.
ಕಣದಿಂದ ಹಿಂದೆ ಸರಿಯುವಂತೆ ಸ್ವತಃ ಬಿಎಸ್‌ವೈ ಮಾಡಿಕೊಂಡಿರುವ ಮನವಿಗೂ ದಿಂಗಾಲೇಶ್ವರ ಸ್ವಾಮೀಜಿ ಜಗ್ಗಿಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಗುಡುಗಿ ಕಣದಲ್ಲಿರುವ ದಿಂಗಾಲೇಶ್ವರರು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದ್ದಾರೆ ಎಂಬುದೂ ಚರ್ಚೆಗೆ ಗ್ರಾಸವಾಗಿದೆ. ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ತಳಮಳದಾವಣಗೆರೆಯಲ್ಲಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡು ಬಂಡಾಯ ಅಭ್ಯರ್ಥಿಯಾಗಿ ವಿನಯ್‌ ಕುಮಾರ್‌ ಕಣದಲ್ಲಿರುವುದು ಆಡಳಿತಾರೂಢ ಕಾಂಗ್ರೆಸ್‌ಗೆ ತಲೆನೋವಾಗಿದೆ. ವಿನಯ್‌ ಅವರಿಗೆ ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರ ಶ್ರೀರಕ್ಷೆ ಇರುವುದು ಶಾಮನೂರು ಶಿವಶಂಕರಪ್ಪ ಕುಟುಂಬದಲ್ಲಿ ತಳಮಳಕ್ಕೆ ಕಾರಣವಾಗಿದೆ.
ಚಿತ್ರಣದ ಕುತೂಹಲಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿನಾಮಪತ್ರ ಸಲ್ಲಿಸಿರುವ ಒಟ್ಟು 272 ಅಭ್ಯರ್ಥಿಗಳಲ್ಲಿಅಂತಿಮವಾಗಿ ಕಣದಲ್ಲಿಯಾರೆಲ್ಲಾಉಳಿಯಲಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ಸೋಮವಾರ ಲಭ್ಯವಾಗಲಿದೆ. ಆ ಬಳಿಕ ರಾಜ್ಯದಲ್ಲಿ2ನೇ ಹಂತದಲ್ಲಿಮತದಾನ ನಡೆಯುವ ಈ 14 ಕ್ಷೇತ್ರಗಳಲ್ಲಿಪ್ರಚಾರದ ಭರಾಟೆ ಆರಂಭವಾಗಲಿದೆ. ಯಾರೆಲ್ಲಾ ಸ್ಪರ್ಧೆ?ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕೇಂದ್ರದ ಮಾಜಿ ಸಚಿವ ರಮೇಶ್‌ ಜಿಗಜಣಗಿ, ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಖರ್ಗೆ ಅಳಿಯ ರಾಧಾಕೃಷ್ಣ, ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ, ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್‌, ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಪುತ್ರ ಮೃಣಾಲ್‌, ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಸ್ಪರ್ಧೆಯಿಂದ ಉತ್ತರದ ಅಖಾಡ ಗಮನ ಸೆಳೆಯುತ್ತಿದೆ.
ಬಿರು ಬಿಸಿಲಿನ ನಡುವೆಯೂ ಅಭ್ಯರ್ಥಿಗಳು ಸಕ್ರಿಯ ಪ್ರಚಾರದಲ್ಲಿತೊಡಗಿದ್ದಾರೆ.

READ ON APP