Wednesday Tips: ಬುಧವಾರ ಈ ಕೆಲಸ ಮಾಡಿದರೆ ವೃತ್ತಿಯಲ್ಲಿ ಸಕ್ಷಸ್ ಫಿಕ್ಸ್.!
ಗೋಸೇವೆ ಮಾಡಿ
ನಿಮ್ಮ ವೃತ್ತಿ ಕ್ಷೇತ್ರದಲ್ಲಿ ನೀವು ಪುನರಾವರ್ತಿತ ಯಶಸ್ಸನ್ನು ಎದುರಿಸುತ್ತಿದ್ದರೆ, ಬುಧವಾರ ಹಸುವಿಗೆ ಹಸಿರು ಹುಲ್ಲನ್ನು ತಿನ್ನಲು ನೀಡಬೇಕು. ಒಂದು ವೇಳೆ ಇದನ್ನು ಮಾಡಲಿ ನಿಮಗೆ ಸಾಧ್ಯವಾಗದೇ ಇದ್ದರೆ ಯಾವುದೇ ಒಂದು ಗೋಶಾಲೆಗೆ ಹಣವನ್ನು ದಾನವಾಗಿ ನೀಡುವ ಮೂಲಕ ಅವುಗಳಿಗೆ ಆಹಾರವನ್ನು ಒದಗಿಸಿ.
PC: Pexel
Arjuna Grandson: ಅರ್ಜುನನ ಮೊಮ್ಮಗನ ಸಾವಿಗೆ ಈತನ ಶಾಪವೇ ಕಾರಣ.!
ಗಣೇಶನಿಗೆ ದುರ್ವಾ
ಧಾರ್ಮಿಕ ಗ್ರಂಥಗಳ ಪ್ರಕಾರ, ದುರ್ವಾ ಹುಲ್ಲುಗಳು ಗಣೇಶನಿಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಆದ್ದರಿಂದ ನೀವು ಗಣಪತಿಯನ್ನು ಪೂಜಿಸುವಾಗ ದುರ್ವಾ ಹುಲ್ಲನ್ನು ಮರೆಯದೇ ಅರ್ಪಿಸಬೇಕು. ಇದನ್ನು ಮಾಡುವುದಕ್ಕಾಗಿ ನೀವು ಬುಧವಾರದ ದಿನದಂದು ಗಣೇಶನ ದೇವಸ್ಥಾನಕ್ಕೆ ಹೋಗಿ 21 ದುರ್ವಾ ಹುಲ್ಲಿನ ಕಟ್ಟನ್ನು ಅವನಿಗೆ ಅರ್ಪಿಸಿ.
ಗಣೇಶ ಮಂತ್ರ ಪಠಿಸಿ
ನೀವು ಆಫೀಸ್ನಲ್ಲಿ ನಿಮ್ಮ ಬಾಸ್ನೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸಿದರೆ, ಬುಧವಾರದ ದಿನದಂದು ವಿಧಿವಿಧಾನಗಳ ಪ್ರಕಾರ ಗಣಪತಿಯನ್ನು ಪೂಜಿಸಬೇಕು ಮತ್ತು ಗಣಪತಿಯ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತು 'ಶ್ರೀ ಗಣೇಶಾಯ ನಮಃ' ಎಂಬ ಮಂತ್ರವನ್ನು 21 ಬಾರಿ ಜಪಿಸಬೇಕು.
PC: Unsplash
Night Mantra: ರಾತ್ರಿ ಈ ಮಂತ್ರಗಳನ್ನು ಪಠಿಸಿದರೆ ಸಖತ್ ನಿದ್ದೆ ಬರುತ್ತೆ.!
ಗಣೇಶನಿಗೆ ಲಡ್ಡು
ಇದಲ್ಲದೆ ಬುಧವಾರದಂದು ಗಣೇಶನಿಗೆ ಲಡ್ಡುಗಳನ್ನು ಅರ್ಪಿಸಿ. ಸಾಧ್ಯವಾದರೆ ತುಪ್ಪ, ಸಕ್ಕರೆ ಮತ್ತು ಬಿಳಿ ಎಳ್ಳು ಬೆರೆಸಿ ಲಡ್ಡುಗಳನ್ನು ತಯಾರಿಸಿ ಗಣೇಶನಿಗೆ ನೈವೇದ್ಯ ನೀಡಬಹುದು. ಹೀಗೆ ಮಾಡುವುದರಿಂದ ಜೀವನದಲ್ಲಿ ಬರುವ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.
ತಾಯಿ ಶಕ್ತಿ ಪೂಜೆ
ಬುಧವಾರದ ದಿನದಂದು ಗಣೇಶನನ್ನು ಮಾತ್ರವಲ್ಲ, ಜಗನ್ಮಾತೆ ತಾಯಿ ಶಕ್ತಿಯನ್ನೂ ಈ ದಿನ ಪೂಜಿಸಲಾಗುತ್ತದೆ ಮತ್ತು ಈ ದಿನ ತಾಯಿಗೆ ಸುಮಂಗಲಿಯರು ಬಳಸುವ ವಸ್ತುಗಳಾದ ಸೀರೆ, ರವಿಕೆ, ಬಳೆ, ಕುಂಕುಮ, ಅರಿಶಿನ ಹೂವು ಸೇರಿದಂತೆ ಇನ್ನಿತರ ವಸ್ತುಗಳನ್ನು ಅರ್ಪಿಸಬೇಕು. ಇದು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸುಖವನ್ನು ತರುತ್ತದೆ.
PC: Unsplash
READ ON APP