Hero Image

Arjuna Grandson: ಅರ್ಜುನನ ಮೊಮ್ಮಗನ ಸಾವಿಗೆ ಈತನ ಶಾಪವೇ ಕಾರಣ.!

ಮಹಾಭಾರತದಲ್ಲಿ ಲಕ್ಷಾಂತರ ಜನರು ಯುದ್ಧದಲ್ಲಿ ಹತರಾದರೆ, ಇನ್ನು ಒಂದಿಷ್ಟು ಜನರು ಇನ್ನಾವುದೇ ಶಾಪಗಳಿಂದಾಗಿ, ರೋಗಗಳಿಂದಾಗಿ ಹಾಗೂ ಇನ್ನಿತರ ಸಮಸ್ಯೆಗಳಿಂದ ಮರಣ ಹೊಂದಿದ್ದಾರೆ. ಅದೇ ರೀತಿ ಅರ್ಜುನನ ಮಗ ಅಭಿಮನ್ಯುವಿಗೆ ಮತ್ತು ಉತ್ತರೆಯಳಿಗೆ ಜನಿಸಿದ ಮಗನ ಮರಣವೂ ಆಶ್ಚರ್ಯಕರವಾಗಿತ್ತು. ಅಭಿಮನ್ಯು ಮತ್ತು ಉತ್ತರೆಯ ಮಗನ ಹೆಸರು ರಾಜ ಪರೀಕ್ಷಿತ್‌. ರಾಜ ಪರೀಕ್ಷಿತನು ಆಳುತ್ತಿದ್ದ ಕೋಟೆಯನ್ನು ಪರೀಕ್ಷಿತ್‌ ಕೋಟೆಯೆಂದೇ ಕರೆಯಲಾಗುತ್ತಿತ್ತು.
ರಾಜ ಪರೀಕ್ಷಿತ್‌ನ ಸಾವು ಸಾಮಾನ್ಯವಾದ ಸಾವಲ್ಲ. ಆತ ಹಾವು ಕಡಿತದಿಂದ ಸಾವನ್ನಪ್ಪುತ್ತಾನೆ. ಇದಕ್ಕೆ ಸಂಬಂಧಿಸಿದಂತೆ ಒಂದು ಕಥೆ ಕೂಡ ಇದೆ. ಅದು ಯಾವುದು ಎಂಬುದನ್ನ ಇಲ್ಲಿ ತಿಳಿದುಕೊಳ್ಳೋಣ.. Night Mantra: ರಾತ್ರಿ ಈ ಮಂತ್ರಗಳನ್ನು ಪಠಿಸಿದರೆ ಸಖತ್ ನಿದ್ದೆ ಬರುತ್ತೆ.! 1. ಶೃಂಗಿ ಋಷಿಯ ಆಶ್ರಮ ಸೇರಿದ ರಾಜ:ರಾಜ ಪರೀಕ್ಷಿತನು ಒಮ್ಮೆ ಕಾಡಿನಲ್ಲಿ ಹೋಗುತ್ತಿರುವಾಗ ಆತನಿಗೆ ತುಂಬಾ ಬಾಯಾರಿಕೆಯಾಗುತ್ತದೆ. ನೀರು ಕುಡಿಯಲು ಬಯಸುತ್ತಾನೆ. ನೀರನ್ನು ಹುಡುಕಿಕೊಂಡು ಹಾಗೇ ಸಾಗುತ್ತಿರುವಾಗ ರಾಜ ಪರೀಕ್ಷಿತನಿಗೆ ಶೃಂಗೀ ಋಷಿಯ ಆಶ್ರಮವಿಂದು ಕಾಣಿಸುತ್ತದೆ. ಆಗ ಅವನು ತನ್ನ ದಾಹವನ್ನು ತೀರಿಸಿಕೊಳ್ಳಲು ಆಶ್ರಮದೊಳಗೆ ಹೋಗುತ್ತಾನೆ.
2. ತಪಸ್ಸಿನಲ್ಲಿ ಮಗ್ನರಾದ ಶೃಂಗಿ ಋಷಿ:ರಾಜ ಪರೀಕ್ಷಿತನು ಋಷಿಯನ್ನು ಗುಡಿಸಿಲಿನ ಹೊರಗೆ ನಿಂತು ಕೂಗುತ್ತಾನೆ. ಆದರೆ, ಯಾರು ಆತನ ಬಳಿಗೆ ಬರುವುದಿಲ್ಲ. ಆಗ ಅವನು ಗುಡಿಸಿಲಿನ ಒಳಗೆ ಪ್ರವೇಶಿಸುತ್ತಾನೆ. ಅಲ್ಲಿ ಶೃಂಗಿ ಋಷಿಯು ತಪಸ್ಸು ಮಾಡುವುದನ್ನು ನೋಡುತ್ತಾನೆ. ನಂತರ ಪರೀಕ್ಷಿತನು ಹಲವು ಬಾರಿ ಶೃಂಗಿ ಋಷಿಯನ್ನು ಕರೆಯುತ್ತಾನೆ. ಆದರೆ, ಋಷಿ ಕಿಂಚಿತ್ತು ಅವನ ಕೂಗಿಗೆ ತಲೆಕೆಡಿಕೊಳ್ಳದೆ ತಪಸ್ಸಿನಲ್ಲಿ ಮಗ್ನರಾಗುತ್ತಾರೆ. 3. ಪರೀಕ್ಷಿತನ ಕೋಪ:ಇದರಿಂದ ಕೋಪಗೊಂಡ ರಾಜ ಪರೀಕ್ಷಿತನು ತನ್ನ ಮಾತನ್ನೇ ಅಲ್ಲಗಳೆಯುವಷ್ಟು ಈ ಋಷಿಗೆ ಜಂಭವೇ, ನಾನ್ಯಾರು.? ನನ್ನ ಪರಾಕ್ರಮ ಎಂತಹುದ್ದು ಎಂದು ಸರಿಯಾಗಿ ತಿಳಿದುಕೊಳ್ಳದೆ ನನ್ನ ಮೇಲೆ ವೈರಾಗ್ಯ ತೋರುತ್ತಿರುವೆಯಾ ಎಂದು ಶೃಂಗಿ ಋಷಿಗಳ ಮೈಮೇಲೆ ಸತ್ತಿರುವ ಹಾವನ್ನು ಎಸೆಯುತ್ತಾನೆ. Sanatan Dharma: ಸನಾತನ ಧರ್ಮದ ನಿಯಮಗಳಿಂದ ನಿಮಗೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.! 4. ರಾಜ ಪರೀಕ್ಷಿತನಿಗೆ ಶಾಪ:
ಅದೇ ಸಮಯದಲ್ಲಿ ಶೃಂಗಿ ಋಷಿಯ ಮಗನು ತನ್ನ ತಂದೆ ತಪಸ್ಸು ಮಾಡುತ್ತಿರುವ ಗುಡಿಸಿಲಿನತ್ತ ಬರುತ್ತಾನೆ. ತನ್ನ ತಂದೆಗೆ, ಅವರ ತಪಸ್ಸಿಗೆ ಮಾಡುತ್ತಿರುವ ಅವಮಾನವನ್ನು ಕಂಡು ಕೋಪಗೊಂಡ ಶೃಂಗಿ ಋಷಿಯ ಮಗನು ಪರೀಕ್ಷಿತ್‌ನಿಗೆ ಇನ್ನು ಕೇವಲ 7 ದಿನಗಳೊಳಗೆ ಹಾವು ಕಚ್ಚಿ ಸಾಯುತ್ತೀಯ ಎಂದು ಶಾಪವನ್ನು ನೀಡಿದನು. ಶೃಂಗಿ ಋಷಿಯ ಮಗನ ಶಾಪದಂತೆ ರಾಜ ಪರೀಕ್ಷಿತನಿಗೆ 7 ದಿನಗಳೊಳಗೆ ಸಾವು ಸಂಭವಿಸಿತು. 5. ಶೃಂಗಿ ಬಳಸಿದ ಮರ:ಇಂದಿಗೂ ನಾವು ಈ ಮರವನ್ನು ಅಂದರೆ ಅಂದು ಶೃಂಗಿ ಋಷಿಯು ತಾನು ತಪಸ್ಸನ್ನು ಮಾಡಲು ಬಳಸಿದ ಮರವು ಇಂದಿಗೂ ಪರೀಕ್ಷಿತ್‌ಗಠದಲ್ಲಿದೆ. ಆ ದಿನ ಶೃಂಗಿ ಋಷಿ ಇದೇ ಮರದ ಕೆಳಗೆ ಕುಳಿತು ತಪಸ್ಸ ನ್ನು ಮಾಡಿದ್ದನು. Abrahamic Religion: ವಿಶ್ವದ ಹೊಸ ಧರ್ಮ ಅಬ್ರಹಾಮಿಕ್ ಧರ್ಮ.! ಈಈ ಕಾರಣದಿಂದಾಗಿ ಅರ್ಜುನನ ಮೊಮ್ಮಗನಾದ ರಾಜ ಪರೀಕ್ಷಿತನು ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾನೆ. ಮಹಾಭಾರತದಲ್ಲಿ ಅದೆಷ್ಟೋ ಜನ ಯುದ್ಧದಲ್ಲಿ ಮರಣಹೊಂದಿದರೆ ಈತ ಶಾಪಕ್ಕೆ ಗುರಿಯಾಗಿ ಅದರಿಂದ ಮರಣ ಹೊಂದುತ್ತಾನೆ.

READ ON APP