Hero Image

ಪಾಕ್ ಪರ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು: ಜಮೀರ್ ಅಹ್ಮದ್ ಖಾನ್

ಬಾಗಲಕೋಟೆ: ``ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೊಳಿಸಬೇಕು" ಎಂದು ವಕ್, ಅಲ್ಪಸಂಖ್ಯಾತರ ಖಾತೆ ಸಚಿವ ಜಮೀರ್ ಅಹಮ್ಮದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್‌ನಿಂದ ಆಯೋಜಿಸಲಾಗಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರ ಪರ ಮತಪ್ರಚಾರ ಭಾಷಣ ಮಾಡಿದರು.
ಮೊದಲು ಹಿಂದೂಸ್ತಾನಿ, ಆ ಮೇಲೆ ಮುಸ್ಲಿಂಅಸ್ಸಲ್ಲಾಂ ಅಲೈಕುಂ ಎಂದು ಪ್ರಚಾರ ಭಾಷಣ ಪ್ರಾರಂಭಿಸಿದ ಅವರು, ಜೈ ಭೀಮ್ ಅನ್ನುತ್ತಾ ಭಾಷಣ ಮುಂದುವರಿಸಿದರು. ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹುಟ್ಟಿರದಿದ್ದರೆ, ನಮ್ಮ ಅಸ್ತಿತ್ವವೇ ಇರುತ್ತಿರಲಿಲ್ಲ. ಹೀಗೆ ನಿಮ್ಮ ಮುಂದೆ ಬಂದು ನಾನು ಮಾತಾಡುವುದು ಸಾಧ್ಯವಿರಲಿಲ್ಲ ಎಂದರು. ನಾನು ಮೊದಲು ಹಿಂದೂಸ್ತಾನಿ, ಆ ಮೇಲೆ ಕನ್ನಡಿಗ, ಆಮೇಲೆ ಮುಸಲ್ಮಾನ ಎಂದು ತಿಳಿಸಿದರು. ರಾಯಚೂರಿನಲ್ಲಿ ರವ ಭೋಸರಾಜ ಅವರಿಗೆ ರವಿಸಾಬ್ ಜೈ ಎಂದರೆ ಪಾಕಿಸ್ತಾನ ಜೈ ಎಂದು ಆರೋಪಿಸುತ್ತಾರೆ. ವಿಧಾನಸೌಧದಲ್ಲಿ ಕೂಗಿದವವರಿಗೆ ಜೈಲಿಗೆ ಕಳಿಸಿದ್ದೇವೆ.
ನ್ಯಾಯಾಧೀಶರು ಶಿಕ್ಷೆ ಕೊಡಬೇಕು. ನಾವು ಕೊಡಿಸಲು ಆಗುವುದಿಲ್ಲ ಎಂದು ತಿಳಿಸಿದರು. ``ಪಾಕ್ ಪರ ಘೋಷಣೆ ಕೂಗಿ ನಮ್ಮ ಮೇಲೆ ಆರೋಪ ಹೊರಿಸುವ ಘಟನೆಗಳು ನಡೆದಿವೆ. ರಾಯಚೂರಿನಲ್ಲಿ ನಡೆದ ಘಟನೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇಂತಹ ಘೋಷಣೆ ಕೂಗುವ ದೇಶದ್ರೋಹಿಗಳ ವಿಚಾರಣೆ ನಡೆಸುವ ಬದಲು ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲುವ ವ್ಯವಸ್ಥೆ ಜಾರಿಯಾಗಬೇಕು. ಹೀಗಾದರೆ ಘಟನೆಗಳಿಗೆ ಕಡಿವಾಣ ಹೇರಲು ಸಾಧ್ಯವಿದೆ. ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ಒದಗಿಸಿದ್ದಾರೆ. ನಾವು ದೇಶದ್ರೋಹಿಗಳಲ್ಲ" ಎಂದು ಹೇಳಿದರು. ಬಿಜೆಪಿಗೆ ಕುರ್ಚಿ ಪ್ರೀತಿ``ಇಂದು ದೇಶ ಅತಿ ಸಂಕಟದ ಸ್ಥಿತಿಯಲ್ಲಿದೆ, ಕ್ಯಾನ್ಸರ್ ಮೊದಲ ಹಾಗೂ ಎರಡನೇ ಹಂತದಲ್ಲಿದ್ದರೆ ಗುಣಪಡಿಸಬಹುದು.
ಮೂರನೇ ಹಂತದಲ್ಲಿದ್ದರೆ ಸಾಧ್ಯವಿಲ್ಲ. ಇಸ್ ಬಾರ್ ಚಾರ್ ಸೋ ಪಾರ್ ಅಲ್ಲ ಇಸ್ ಬಾರ್ ಚಾರ್ ಸೋ ಬೀಸ್'' ಎಂದು ಹೇಳಬೇಕಾದ ಸ್ಥಿತಿಯಿದೆ. ಆದ್ದರಿಂದ ಮೂರನೇ ಬಾರಿ ಕ್ಯಾನ್ಸರ್ ಬರದಂತೆ ನಾವೆಲ್ಲ ಎಚ್ಚರಿಕೆ ವಹಿಸಬೇಕು ಎಂದು ಎಂದು ವ್ಯಂಗ್ಯವಾಡಿದರು. ಹಿಂದು, ಮುಸ್ಲಿಮರ ಮಧ್ಯೆ ಕಲಹ ಮೂಡಿಸಿ ಬಿಜೆಪಿ ಲಾಭ ಪಡೆಯುತ್ತದೆ. ಅವರಿಗೆ ಎರಡೂ ಧರ್ಮಗಳ ಮೇಲೆ ಅಲ್ಲ, ಕುರ್ಚಿಯ ಮೇಲೆ ಪ್ರೀತಿಯಿದೆ" ಎಂದು ಆರೋಪ ಮಾಡಿದರು. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದ್ದ ಅವ ರು ಪಾಕಿಸ್ತಾನದ ಪರ ಘೋಷಣೆ ಕೂಗಿದವರು ಯಾರೇ ಆಗಿರಲಿ, ಅವರನ್ನು ನೇಣಿಗೆ ಹಾಕುವುದಲ್ಲ, ನಾವೇ ಗುಂಡಿಟ್ಟು ಕೊಲ್ಲುತ್ತೇವೆ ಎಂದು ಗುಡುಗಿದ್ದರು.
ನಾವು ಹಿಂದೂ ಮುಸ್ಲಿಂ ಅಲ್ಲ, ನಾವೆಲ್ಲಾ ಹಿಂದೂಸ್ಥಾನಿಗಳಾಗಿದ್ದೇವೆ ಎಂದಿದ್ದರು. ಬಿಜೆಪಿಯು ಹಿಂದೂ- ಮುಸ್ಲಿಂ ಜನರನ್ನು ಒಡಯುತ್ತಿದೆ. ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ನಮ್ಮೆಲ್ಲರನ್ನೂ ಸಾಯಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದರು.

READ ON APP