Hero Image

ನಾನು - ಸಿದ್ದರಾಮಯ್ಯ 10 ವರ್ಷ ಆಡಳಿತ ಮಾಡ್ತೀವಿ, ಯಾರೇನೂ ಮಾಡೋಕಾಗೊಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಹುಬ್ಬಳ್ಳಿ: ``ನಾನು ಸಿದ್ದರಾಮಯ್ಯ ಇನ್ನು ಹತ್ತು ವರ್ಷ ಆಡಳಿತ ಮಾಡ್ತೀವಿ. ಇನ್ನು ಹತ್ತು ವರ್ಷ ನಮ್ಮದೇ ಸರ್ಕಾರ.''- ಇದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸ್ಪಷ್ಟ ನುಡಿ.ಕುಂದಗೋಳ ಪಟ್ಟಣದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರ ದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರವಾಗಿ ಮತಯಾಚನೆ ಮಾಡಿದ ಅವರು ಈ ಮೂಲಕ ಚುನಾವಣೆ ಬಳಿಕ ಮುಖ್ಯಮಂತ್ರಿ ಪಟ್ಟ ಬದಲಾವಣೆ ಬಗೆಗಿನ ಊಹಾಪೂಹಗಳಿಗೆ ತೆರೆ ಎಳೆದರು.
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ನೇಹಾ ಹಿರೇಮಠ್ ಕೊಲೆ ಪ್ರಕರಣ ಪ್ರಸ್ತಾಪಿಸುವ ವೇಳೆ ಅವರು ಈ ಮಾತನ್ನು ಹೇಳಿದರು. ಯಾರೂ ಏನೂ ಮಾಡೋಕಾಗೊಲ್ಲಅವರು ಪ್ರೀತಿ ಮಾಡಿದ್ರು. ನಾವು ಆರೋಪಿಯನ್ನು ಒದ್ದು ಒಳಗೆ ಹಾಕಿದ್ದು ಶಿಕ್ಷೆ ಆಗುತ್ತೆ. ಬಿಜೆಪಿಯವರು ನಿರಂಜನ ಹಿರೇಮಠನ ಹೊತ್ತುಕೊಂಡ ತಿರುಗಾಡಿದ್ರೂ ಅವರು ಕಾಂಗ್ರೆಸ್ ಪಕ್ಷಕ್ಕೆ , ಈ ಸರ್ಕಾರಕ್ಕೆ ಏನೂ ಮಾಡೋಕೆ ಆಗೊಲ್ಲ. ನಾನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರಗೆ ಹೇಳುತ್ತೇನೆ. ನಾನು ಸಿದ್ದರಾಮಯ್ಯ ಇನ್ನು ಹತ್ತು ವರ್ಷ ಆಡಳಿತ ಮಾಡ್ತೇವೆ. ಇನ್ನು ಹತ್ತು ವರ್ಷ ಸರ್ಕಾರ ನಮ್ಮದೇ ಎಂದು ಸವಾಲು ಹಾಕಿದರು.
ಇದೇವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು ಪ್ರಧಾನಿ ಮೋದಿಯಿಂದ ದೇಶಕ್ಕೆ ಏನು ಲಾಭ ಆಗಿದೆ ಎಂದು ಪ್ರಶ್ನಿಸಿದರು. ಈಗಿನ‌ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ನಿಮ್ಮ ಸಂಸದರು, ಮೋದಿ ಈ ದೇಶದ ಪ್ರಧಾನಿ. ಈ ಐದು ವರ್ಷದಲ್ಲಿ ಏನ ಲಾಭ ಆಗಿದೆ? ಬದಲಾವಣೆ ಆಗಿದ್ರೆ ವೋಟ್ ಹಾಕಿ. ನಿಮಗೆ ಯಾರಾದರೂ 15 ಲಕ್ಷ ಹಾಕಿದ್ರಾ.? ಸಲೀಂ ನಿನಗೆ ಬಂತಾ? ಕುಸುಮಾ ಶಿವಳ್ಳಿ ನಿನಗೆ ಬಂತಾ? ಕುಸುಮಾ ಶಿವಳ್ಳಿ ಪಿಎ ಗೆ ಬಂತಾ? ಎಂದು ವೇದಿಕೆ ಮೇಲೆದ್ದವರನ್ನು ಕೇಳಿದರು. ಏನ್ ಮಾಡಿದ್ದೀರಿ ಎಂದು ನಾವು ವೋಟ್ ಮಾಡಬೇಕು ಎಂದು ಪ್ರಶ್ನಿಸಿದರು. ಗ್ಯಾರಂಟಿ ಕೊಟ್ಟಿದ್ದಕ್ಕೆ ಜನಾಶೀರ್ವಾದಮಹದಾಯಿ ವಿಚಾರದಲ್ಲಿ ಬಿಜೆಪಿ ವಿಜಯೋತ್ಸವ ಆಚರಣೆ ಮಾಡಿದರು.
ನೀರು ಬಂತು ಎಂದು ಬ್ಯಾನರ್ ಹಾಕಿ ವಿಜಯೋತ್ಸವ ಗ್ಯಾರಂಟಿ ಕೊಟ್ಟಿದ್ದಕ್ಕೆ ಜನ ನಮ್ಮ ಪರ ಹರಕೆ ಮಾಡುತ್ತಿದ್ದಾರೆ. ಮಹದೇಶ್ವರದಲ್ಲಿ ಮೂರು ಕೋಟಿ ಹಣ ಬಂದಿದೆ. ದೇವಸ್ಥಾನಕ್ಕೆ ಹೋಗಿರುವ ಭಕ್ತರು ಸಿಎಂ- ಡಿಸಿಎಂ ಗೆ ಒಳ್ಳೆಯದಾಗಲಿ ಎಂದು ಹರಕೆ ಹಾಕುತ್ತಿದ್ದಾರೆ ಹತ್ತು ರೂಪಾಯಿ ಜಾಸ್ತಿ ಹಾಕಿ ಬರ್ತೀದಾರೆ. ಹೀಗಾಗಿ ಮಹದೇಶ್ವರದಲ್ಲಿ ಮೂರು ಕೋಟಿ ಹಣ ಬಂದಿದೆ ಎಂದು ತಿಳಿಸಿದರು. ದಿಂಗಾಲೇಶ್ವರ ಸ್ವಾಮೀಜಿಗೆ ದೊಡ್ಡ ನಮಸ್ಕಾರ. ಅವರು ಪ್ರಹ್ಲಾದ್ ಜೋಶಿ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ವಿನೋದ್ ಅಸೂಟಿ ಮಾಜಿ ಸಚಿವ ಸಿ..ಎಸ್. ಶಿವಳ್ಳಿ ತದ್ರೂಪಿ ಆಗಿದ್ದು ಸಿದ್ದರಾಮಯ್ಯ, ನಾನು ಕೂಡಮರಿ ಟಗರು ಹುಡುಕಿದ್ದೇವೆವಿನೋದ್ ಅಸೂಟಿಯನ್ನು ನಿಮ್ಮ ಮಡಲಿಗೆ ಹಾಕಿದ್ದೇವೆ.
ವಿನೋದ್ ಅಸೂಟಿಗೆ ಆಶೀರ್ವಾದ ಮಾಡಿ ಎಂದರು.

READ ON APP