ಮತ್ತೊಂದು ಬಾಲಿವುಡ್ ಚಿತ್ರ ಒಪ್ಪಿಕೊಂಡಿದ್ದಾರಂತೆ ರಾಕಿಂಗ್ ಸ್ಟಾರ್ ಯಶ್
Photo Courtesy: Twitter
ಬೆಂಗಳೂರು: ಕೆಜಿಎಫ್ ಬಳಿಕ ಬಾಲಿವುಡ್ ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಆಗಾಗ ಹಿಂದಿ ಸಿನಿಮಾ ಒಪ್ಪಿಕೊಂಡ ಬಗ್ಗೆ ರೂಮರ್ ಗಳು ಕೇಳಿಬರುತ್ತಲೇ ಇರುತ್ತವೆ. ಇದೀಗ ಮತ್ತೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಂಡ ಸುದ್ದಿ ಕೇಳಿಬರುತ್ತಿದೆ.ಯಶ್ ಈ ಮೊದಲು ರಣಬೀರ್ ಕಪೂರ್ ನಾಯಕರಾಗಿರುವ ಹಿಂದಿಯ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಯಿತ್ತು.
ಬಳಿಕ ಯಶ್ ಈ ಸಿನಿಮಾಗೆ ಸಹ ನಿರ್ಮಾಣ ಮಾಡಲಿರುವುದು ಪಕ್ಕಾ ಆಗಿದೆ. ಆದರೆ ಇನ್ನೂ ರಾವಣನ ಪಾತ್ರ ಮಾಡುತ್ತಾರೆಯೇ ಎಂಬುದು ಕನ್ ಫರ್ಮ್ ಮಾಡಿಲ್ಲ.
ಈ ನಡುವೆ ಯಶ್ ಮತ್ತೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಬರುತ್ತಿದೆ. 1993 ರಲ್ಲಿ ರಿಲೀಸ್ ಆಗಿದ್ದ ಸಂಜಯ್ ದತ್, ಜಾಕಿ ಶ್ರಾಫ್, ಮಾಧುರಿ ದೀಕ್ಷಿತ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಖಳನಾಯಕ್ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇದೀಗ ಅದೇ ಸಿನಿಮಾದ ಸೀಕ್ವೆಲ್ ಬರುತ್ತಿದೆ. ಈ ಸಿನಿಮಾದಲ್ಲಿ ಬಲ್ಲು ಬಲರಾಮ್ ಪಾತ್ರವನ್ನು ನಿರ್ವಹಿಸಲು ಚಿತ್ರತಂಡ ಯಶ್ ರನ್ನು ಸಂಪರ್ಕಿಸುತ್ತಿದೆ ಎಂಬ ಮಾತಿದೆ. ಯಶ್ ಅಥವಾ ಅಲ್ಲು ಅರ್ಜುನ್ ಅವರಂತಹ ಖಡಕ್ ನಟರನ್ನು ಕರೆತರಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಇದಕ್ಕೆ ಯಶ್ ಒಪ್ಪಿಗೆ ನೀಡುತ್ತಾರಾ ಕಾದು ನೋಡಬೇಕಿದೆ.
ಈ ನಡುವೆ ಯಶ್ ಮತ್ತೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಬರುತ್ತಿದೆ. 1993 ರಲ್ಲಿ ರಿಲೀಸ್ ಆಗಿದ್ದ ಸಂಜಯ್ ದತ್, ಜಾಕಿ ಶ್ರಾಫ್, ಮಾಧುರಿ ದೀಕ್ಷಿತ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಖಳನಾಯಕ್ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇದೀಗ ಅದೇ ಸಿನಿಮಾದ ಸೀಕ್ವೆಲ್ ಬರುತ್ತಿದೆ. ಈ ಸಿನಿಮಾದಲ್ಲಿ ಬಲ್ಲು ಬಲರಾಮ್ ಪಾತ್ರವನ್ನು ನಿರ್ವಹಿಸಲು ಚಿತ್ರತಂಡ ಯಶ್ ರನ್ನು ಸಂಪರ್ಕಿಸುತ್ತಿದೆ ಎಂಬ ಮಾತಿದೆ. ಯಶ್ ಅಥವಾ ಅಲ್ಲು ಅರ್ಜುನ್ ಅವರಂತಹ ಖಡಕ್ ನಟರನ್ನು ಕರೆತರಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಇದಕ್ಕೆ ಯಶ್ ಒಪ್ಪಿಗೆ ನೀಡುತ್ತಾರಾ ಕಾದು ನೋಡಬೇಕಿದೆ.
Next Story
READ ON APP